ಕಾಗಿನೆಲೆಯಲಿ ವಿಶ್ವಮಾನವ ಸಂದೇಶದ ನೆಲೆ











  ಅರಸರು, ಸಾಮಂತರಾಳಿದ ಊರುಗಳಲ್ಲಿರುವ ಅವಶೇಷಗಳಂತೆ ಬಾಡದ ಈ ಅರಮ ನೆಯೂ ಕಾಲ ಗರ್ಭದಲ್ಲಿ ಹೂತು ಹೋಗಿತ್ತು. ಸಂಶೋಧಕರ ಅಧ್ಯಯನ ಪುರಾತತ್ವ ಇಲಾಖೆ ಉತ್ಖನನ, ಮಾಜಿ ಸಚಿವ ಹಾಲಿ ಶಾಸಕ ಬಸವರಾಜ ಬೊಮ್ಮಾಯಿ ಅವರ ಇಚ್ಛಾಶಕ್ತಿ ಹಾಗೂ ಕಾಗಿನೆಲೆ ಪ್ರಾಧಿಕಾರದ ಅವಿರತ ಪರಿಶ್ರಮದಿಂದ ಲಕ್ಷಾಂತರ ಪ್ರವಾಸಿಗರ ಮನ ಸೂರೆಗೊಂಡ ಕರ್ನಾಟಕ ಪಾರಂಪರಿಕ ಪ್ರವಾಸಿ ತಾಣವಾಗಿದೆ.

ಕಾಗಿನೆಲೆಯಲಿ ವಿಶ್ವಮಾನವ ಸಂದೇಶದ ನೆಲೆ

ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರಾ?ಆತ್ಮ ಯಾವ ಕುಲ ಜೀವ ಯಾವ ಕುಲ ತತ್ವೇಂದ್ರಿಯಗಳ ಕುಲ ಪೇಳಿರಯ್ಯ! ಆತ್ಮಾಂತರಾತ್ಮ ನೆಲೆಯಾದಿ ಕೇಶವ. ಆತನೊಲಿದ ಮೇಲೆ ಯಾತರ ಕುಲವಯ್ಯ?
ಎಂಬ ಕೀರ್ತನೆ ಮೂಲಕ ಕುಲಕುಲವೆಂದು ಹೊಡೆದಾಡುವ ಧರ್ಮಾಂಧರಿಗೆ ಕುಲದ ನೆಲೆ ಅರಿತು ಬಾಳುವುದು ಹೇಗೆ ಎಂಬುದನ್ನು ಸಾರಿ ಮನೆ ಮಾತಾದವರು ಕನಕದಾಸರು. ಇಂತಹ ದಾರ್ಶನಿಕರ ಕರ್ಮಭೂಮಿ ಕಾಗಿನೆಲೆ ಮತ್ತು ಜನ್ಮಭೂಮಿಯಲ್ಲೀಗ ಅಭಿವೃದ್ಧಿಯ ಗಾಳಿ ಬೀಸುತಿದೆ. 
2006ರಲ್ಲಿ ಅಸ್ತಿತ್ವಕ್ಕೆ ಬಂದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಈ ವರೆಗೆ ನಿರಂತರವಾಗಿ ಹತ್ತು ಹಲವು ಚಟುವಟಿಕೆಗಳನ್ನು ನಡೆಸುತ್ತ ಬಂದಿದೆ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಇಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳು ಇಡೀ ಜಗತ್ತೇ ಕಾಗಿನೆಲೆ ಹಾಗೂ ಬಾಡದತ್ತ ತಿರುಗಿ ನೋಡುವ ಹಾಗೆ ಮಾಡಿವೆ. ಕೋಟ್ಯಂತರ ರೂ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ಯೋಜನೆಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಬಾಡದ ಅರಮನೆಯಲ್ಲಿ ಗೋಡೆಗೆ ಹಾಕಲಾದ ಅವರ ಕೀರ್ತನೆಗಳಂತೂ ಜನರ ಮನ ತಟ್ಟುವಲ್ಲಿ ಯಶಸ್ವಿಯಾಗಿವೆ. ಪ್ರಸ್ತುತ ಪ್ರಾಧಿಕಾರದ ಆಯುಕ್ತರಾಗಿರುವ ಮಲ್ಲೇಶಪ್ಪ ಹೊರಪೇಟೆ ಅವರ ಶ್ರಮದ ಫಲವಾಗಿ ಕಾಗಿನೆಲೆ ಹಾಗೂ ಬಾಡ ಇಂದು ವಿಶ್ವಭೂಪಟದಲ್ಲಿ ಬಾನೆತ್ತರಕ್ಕೆ ಹಾರುತ್ತಿವೆ.
 ರಜೆಯಲ್ಲಂತೂ ಈ ಎರಡೂ ಸ್ಥಳ ಹೇಳಿ ಮಾಡಿಸಿದಂತಿದೆ. ಕನಕರ ಹಾಗೂ ಅವರ ಆರಾಧ್ಯ ದೈವ ಆದಿಕೇಶವನ ದರುಶನ ಪಡೆದು ಪುನೀತರಾಗಲು ಇದಕ್ಕಿಂತ ಮತ್ತೊಂದು ಸೂಕ್ತ ಸ್ಥಳವಿಲ್ಲ. ಪೂಜೆ ಮುಗಿಸಿ ಊಟೋಪಚಾರ ನಂತರ ಟೈಮ್‍ಪಾಸ್ ಹೇಗೆ? ಅನ್ನೋ ಚಿಂತೆ ನಿಮಗೆ ಬೇಡ. ಕನಕ ಮಂದಿರದ ಬಳಿ ವಿಶಾಲವಾಗಿ ಮೈದುಂಬಿಕೊಂಡಿರುವ ಕಾಗಿನೆಲೆ ಕೆರೆ ದೋಣಿ ವಿಹಾರಕ್ಕೆ ಸಿದ್ಧಗೊಂಡಿರುತ್ತದೆ.ಕನಿಷ್ಠ  2 ಕಿ.ಮೀ.ವರೆಗೂ ಕಣ್ಣು ಹಾಯಿಸಿದಷ್ಟು ನೀರಿನ ತೊರೆಯ ಸಂಭ್ರಮವನ್ನು ದೋಣಿಯಲ್ಲಿ ಪಯಣಿಸುವ ಮಜಾ ನಿಮಗೆಲ್ಲೂ ಸಿಗದು. ಕೆರೆ ಗುಂಟ ಹಸಿರು ತೋಟ, ವಿಹಾರದ ವೇಳೆ ಬಗೆ ಬಗೆಯ ಮೀನುಗಳ ದರ್ಶನ ಸಹ ಸಾಧ್ಯವಾಗಲಿದೆ. ಡೋಣಿ ಭರ್ರನೇ ಮುನ್ನುಗ್ಗುತ್ತಿದ್ದರೆ ನೀರಿನ ತೆರೆಗಳು ಅದರ ರಭಸಕ್ಕೆ ಮೈ ಮೇಲೆ ಸಿಂಪರಣೆ ಗೊಂಡು ಶವರ್‍ಬಾತ್ ಮಾಡಿದ ಅನುಭವ ಖಂಡಿತ ನಿಮಗೆ ಸಿಗುತ್ತದೆ. ಹಾಂ. ಈ ವಿಹಾರ ದುಬಾರಿಯಲ್ಲ. ವಯಸ್ಕರಿಗೆ 30 ರೂ.ಮಕ್ಕಳಿಗೆ 15 ರೂ.ಈ ಡೋಣಿ ಪಯಣ ಮುಗಿಸಿದ ತಕ್ಷಣ ಮುಂದೇನು? ಎಂದು ಕಾಯುವ ಅಗತ್ಯವೇ ಇಲ್ಲ. ನೀವು ಸ್ವಂತ ವಾಹನದಲ್ಲಿ ಬಂದಿದ್ದರೆ ಕೇವಲ 15 ನಿಮಿಷದಲ್ಲಿ ಪರಿಸರ ಸ್ನೇಹಿ ಕನಕ ಉದ್ಯಾನ ವನ ನಿಮ್ಮನ್ನು ಕೈಬೀಸಿ ಕರೆಯುತ್ತದೆ.ಪರಿಸರ ಸ್ನೇಹಿ ಉದ್ಯಾನವನದಲ್ಲಿ ಸದ್ಯಕ್ಕೆ ಕ್ಯಾಂಟೀನ ವ್ಯವಸ್ಥೆ ಇಲ್ಲ. ಕಾಗಿನೆಲೆ ಪ್ರಾಧಿಕಾರ ಆವ ರಣದಲ್ಲಿರೋ ಸತ್ಕಾರನಲ್ಲಿ ನಿಮಗಿಷ್ಟವಾದ ಸಂಜೆಯ ಕುರಕುಲು ತಿಂಡಿ ಜತೆ ನೀರು ಗ್ಯಾರಂಟಿ ಸಿಗುತ್ತದೆ. ಮನೆಯಿಂದ ಊಟ-ತಿಂಡಿ ತರೋ ಜಂಜಾಟವೇ ಬೇಡ.
ಪರಿಸರ ಸ್ನೇಹಿ ಕನಕ ಉದ್ಯಾನ!
ಈ ಉದ್ಯಾನ ಪ್ರವೇಶಿಸಿದರೆ, ಬೆಂಗಳೂರಿನ ಲಾಲಬಾಗ್, ಹುಬ್ಬಳ್ಳಿ ಗಾಜಿನಮನೆ ಜತೆಗೆ ನೀವು  ಈಗಾಗಲೇ ನೋಡಿರುವ ಉದ್ಯಾನವನಕ್ಕಿಂತ ಭಿನ್ನ ಎನಿಸುವುದಂತೂ ಗ್ಯಾರಂಟಿ. ಹಸಿರ ಹಾಸಿ ಗೆಯ ಮೇಲೆ ಬಣ್ಣ ಬಣ್ಣದ ಹೂಗುಚ್ಛದ ಚಿತ್ತಾರ. ಗುಲಾಬಿ ತೋಟಗಳು, ನಕ್ಷತ್ರ ವನ, ಕನಕ ದಾಸರ ಸುಂದರ ಮೂರ್ತಿ. ವರ್ಣಿಸಲು ಸಾಧ್ಯವಾಗದಷ್ಟು ಮನಸ್ಸಿಗೆ ಮುದ ನೀಡುವ ಈ ಉದ್ಯಾನವನ ನಿಮ್ಮ ರಜೆಯ ದಿನವನ್ನು ಸಾರ್ಥಕಗೊಳಿಸುತ್ತದೆ.
ಪ್ರಯಾಣ ಹೇಗೆ?
ಕನಕದಾಸರ ಕರ್ಮಭೂಮಿ ಕಾಗಿನೆಲೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿಗೆ ಸೇರಿದ್ದು,  ಕೇವಲ 15 ರಿಂದ 20 ಕಿ.ಮೀ.ದೂರದಲ್ಲಿದೆ. ಪ್ರಯಾಣಕ್ಕೆ ವಿಚಾರಿಸಬೇಕು ಅನ್ನೋ ಧಾವಂತ ಇಲ್ಲ. ಸ್ವಾಗತ ಕಮಾನು ನಿಮ್ಮ ಗಮನ ಸೆಳೆಯುತ್ತದೆ. ಬಸ್ ಹಾಗೂ ಖಾಸಗಿ ವಾಹನಗಳು ಸದಾ ಲಭ್ಯ. ಕಾಗಿನೆಲೆಯಲ್ಲಿ ಕನಕ ಯಾತ್ರಿ ನಿವಾಸ ವಾಸ್ತವ್ಯಕ್ಕೆ(ಉಳಿದುಕೊಳ್ಳಲು) ಲಭ್ಯವಿದೆ.
ಕಡಿಮೆ ಖರ್ಚು, ಕೊಂಚ ಸಮಯದಲ್ಲಿ ಅತ್ಯಧಿಕ ಬೆಲೆ ಬಾಳುವ ಸಿಮೆಂಟ್ ಶಿಲ್ಪವನ ಸಿದ್ಧ ಗೊಳಿಸುವ ಅಪರೂಪದ ಪ್ರಯತ್ನವೊಂದು ಸಂತ ಶ್ರೇಷ್ಠ ಕನಕದಾಸರ ಕರ್ಮಭೂಮಿ ಕಾಗಿ ನೆಲೆಯ ಕನಕ ಪರಿಸರ ಉದ್ಯಾನವನದಲ್ಲಿ ಸಮರೋಪಾದಿಯಲ್ಲಿ ನಡೆಯುತ್ತಿದೆ. ಕರ್ನಾಟಕ ರಾಜ್ಯ ಶಿಲ್ಪ ಅಕಾಡೆಮಿಗೆ ಮುಕು ಟಪ್ರಾಯಗುವ ಈ ಶಿಲ್ಪವನ  ಇಷ್ಟರಲ್ಲೇ ಲೋಕಾರ್ಪಣೆಗೊಳ್ಳಲಿದೆ.
ಹೌದು, ಕರ್ನಾಟಕ ಶಿಲ್ಪ ಅಕಾಡೆಮಿ ಅಸ್ತಿತ್ವಕ್ಕೆ ಬಂದ 20 ವರ್ಷಗಳಲ್ಲಿ ಉತ್ತರ ಕರ್ನಾಟಕದಲ್ಲಿ ಶಿಲ್ಪಗಳನ್ನು ಸಿದ್ಧಪಡಿಸುವ ಶಿಬಿರ ಆಯೋಜಿಸಿದ್ದು ಇದೇ ಪ್ರಥಮ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ರಾಜ್ಯದ ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ಶಿಲ್ಪ ಅಕಾಡೆಮಿ ಸಹಯೋಗದಲ್ಲಿ ಕನ ಕದಾಸರ ಕರ್ಮಭೂಮಿ ಕಾಗಿನೆಲೆಯ ಪರಿಸರ ಉದ್ಯಾನವನದಲ್ಲಿ ಇತೀಚೆಗೆ ಶಿಬಿರ ನಡೆಸಿದೆ.  
ಈ ಅಪರೂಪದ ಶಿಬಿರದಲ್ಲಿ ರಾಜ್ಯದ ಕನಿಷ್ಠ 10 ಕ್ಕೂ ಅಧಿಕ ಜಿಲ್ಲೆಗಳಿಂದ 15 ಹಿರಿಯ ಹಾಗೂ 15 ಕಿರಿಯ ಶಿಲ್ಪಿಗಳು ಜತೆಗೆ ದಾವಣಗೆರೆ ಫೈನ್‍ಆಟ್ರ್ಸ್‍ನ 20 ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಸಂತ ಶ್ರೇಷ್ಠ ಕನಕದಾಸರ ಬದುಕು ಮತ್ತು ಬರಹದ ಎಲ್ಲ ಕಾಲ ಘಟ್ಟಗಳನ್ನು ಪರಿಚ ಯಿಸುವ ಕನಿಷ್ಠ  15 ಕ್ಕೂ ಅಧಿಕ ಪ್ರಸಂಗಗಳನ್ನು ಪ್ರಚುರ ಪಡಿಸುವ ಶಿಲ್ಪಗಳನ್ನು ತಯಾರಿಸುವ ಮೂಲಕ ರಾಜ್ಯದಲ್ಲೇ 3 ನೇ ಬೃಹತ್ ಶಿಬಿರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು.
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಮೂಲಗಳ ಪ್ರಕಾರ 50 ಶಿಲ್ಪಿಗಳು ಬೆಳಗಿನ 7 ರಿಂದ ಸಂಜೆ 7 ರ ವರೆಗೆ ಪರಿಸರ ಉದ್ಯಾನವನದಲ್ಲಿ ಸಿಮೆಂಟ್ ಶಿಲ್ಪಗಳನ್ನು ಸಿದ್ಧಪಡಿಸುವ ಕಾರ್ಯ ಸಮ ರೋಪಾದಿಯಲ್ಲಿ ನಡೆಯುತ್ತಿದೆ. ಕೇವಲ 15 ದಿನಗಳಲ್ಲಿ 15 ತಂಡಗಳು (ಪ್ರತಿ ತಂಡದಲ್ಲಿ 3-4 ಶಿಲ್ಪಿಗಳು) 15 ಕ್ಕೂ ಹೆಚ್ಚು ಪ್ರಸಂಗಗಳಿಗೆ ಸಂದೇಶವಾಗುವ ಶಿಲ್ಪಗಳನ್ನು ಸಿದ್ಧಗೊಳಿಸಿದ್ದಾರೆ.
ಉಡುಪಿ ಶ್ರೀಕೃಷ್ಣನ ದರುಶನ, ಜಾತಿ ಜಾಡ್ಯ, ಸಮಾಜದ ಅಂಕು-ಡೊಂಕುಗಳು, ಮೋಹನ ತರಂಗಣಿ, ಹರಿಭಕ್ತಸಾರ, ನಳ ಚರಿತ್ರೆ ಸೇರಿದಂತೆ ಕನಕರು ಕರ್ಮಭೂಮಿ ಕಾಗಿನೆಲೆಯಲ್ಲಿ ಜೀವಿತದುದ್ದಕ್ಕೂ ಮಾಡಿದ ಪವಾಡಗಳನ್ನು ಅತ್ಯಂತ ವಿಹಂಗಮವಾಗಿ ಸಾಕ್ಷಾತ್ಕರಿಸುವ ರೀತಿ ಯಲ್ಲಿ ಶಿಲ್ಪಗಳನ್ನು ಸಿದ್ಧಗೊಳಿಸಲಾಯಿತು.  
ಅಧಿಕಾರಿಗಳ ಇಚ್ಛಾಶಕ್ತಿ ಹಾಗೂ ಅಕಾಡೆಮಿ ಜೀವಂತಿಕೆಗೆ ಸಾರ್ಥಕತೆ ತಂದುಕೊಡುವ ಈ ಪ್ರಯತ್ನದ ಫಲಶೃತಿ  ಲೋಕಾರ್ಪಣೆ ಮೂಲಕ ಬಹಿರಂಗಗೊಳ್ಳಲಿದೆ. ಶಿಲ್ಪ ಕಲೆ ಪದವಿ ಪಡೆದುಕೊಳ್ಳಲಿರುವ ವಿದ್ಯಾರ್ಥಿಗಳಿಗೆ ಈ ಶಿಬಿರ ಪ್ರಾತ್ಯಕ್ಷಿಕೆಗೆ ಸಾಕ್ಷಿಯಾದರೆ, ಹಿರಿ-ಕಿರಿಯ ಶಿಲ್ಪಿಗಳಿಗೆ ತಮ್ಮ ಪ್ರೌಢಿಮೆ ಹೆಚ್ಚಿಸಿಕೊಳ್ಳುವ ಸದಾವಕಾಶ.
 ತಲುಪಿದರೆ ಸಾಕು.ಉಳಿದುಕೊಳ್ಳಲು ವಸತಿಗೃಹಗಳ ಸಮುಚ್ಛಯ ಲಭ್ಯವಿದೆ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಕರೆ ಮಾಡಿ ನಿಮ್ಮ ರಜೆಯ ಮಜಾಕ್ಕೆ ಬುಕ್ಕಿಂಗ್ ಮಾಡಿ. ದೂರವಾಣಿ ಸಂಖ್ಯೆ (08375)289388
ಬೊಂಬಾಟ್ ಬಾಡ !
ಈ ಅರಮನೆ ಸಮೀಪಿಸುತ್ತಿದ್ದಂತೆ ನಿಮ್ಮ ಮೊಬೈಲ್‍ಗಳು ಚಕ ಚಕನೆ ಫೋಟೋ ಕ್ಲಿಕ್ಕಿ ಸುತ್ತವೆ. ಸೆಲ್ಫಿ ಪ್ರಿಯರಂತೂ ನಾ ಮುಂದು ತಾ ಮುಂದು ಎಂದು ಪೈಪೆÇೀಟಿ ನಡೆಸಿದರೂ ಅಚ್ಚರಿ ಎನಿಸದು. ಇಂಥ ಕುತೂಹಲ ಕೆರಳಿಸುವ ಅರಮನೆ ನೋಡಲು ನೀವು ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕ ಬಾಡಕ್ಕೆ ಬನ್ನಿ ಖುಷಿ ಪಡಿ! 
ಡಣ್ಣ ನಾಯಕನಾಗಿದ್ದ ತಿಮ್ಮಪ್ಪ ನಾಯಕ, ಅಭಿವೃದ್ಧಿ ಕೆಲಸ ಕೈಗೊಂಡ ಸಮಯದಲ್ಲಿ ಬಂಗಾರ (ಕನಕ) ದೊರೆತು ಕನಕ ನಾಯಕನಾದ. ಭಕ್ತಿಯಲ್ಲಿ ಅನರುಕ್ತನಾಗಿ ಮೋಹನ ತರಂಗಿಣಿ, ಹರಿ ಭಕ್ತಸಾರದಂಥ ಶ್ರೇಷ್ಠ ಕೀರ್ತನೆಗಳ ಮೂಲಕ ಭಕ್ತ ಶ್ರೇಷ್ಠ ಕನಕದಾಸರಾಗಿ ವಿಶ್ವಕ್ಕೇ ಸೌಹಾರ್ದತೆ ಬೀಜ ಬಿತ್ತಿದ ಪುಣ್ಯ ಪುರುಷ ಜನ್ಮ ತಳೆದ ಈ ಅರಮನೆ ಇರುವ ಊರೇ ಬಾಡ.
ಅರಮನೆಯಲ್ಲಿ ಏನಿದೆ?
ಮೈಸೂರು, ಬೆಂಗಳೂರ ಅರಮನೆಗಳಲ್ಲಿ ರಾಜಾ ರವಿ ವರ್ಮನ ಕಲಾ ಕೃತಿಗಳನ್ನು ವೀಕ್ಷಿಸು ವುದಾದರೆ, ಬಾಡದ ಅರಮನೆಯಲ್ಲಿ ಕನಕದಾಸರ ಬದುಕಿನ ಎಲ್ಲ ಯಶೋಗಾಥೆಗಳ ಸಮ ಗ್ರವಾದ ಚಿತ್ರಣವನ್ನು ಅಧ್ಯಯನ ರೂಪದಲ್ಲಿ ಸೆರೆ ಹಿಡಿಯಬಹುದಾದ ಕಲಾ ಕೃತಿಗಳು, ಕಲ್ಲಿ ನಲ್ಲಿ ಕೆತ್ತಿರುವ ಸಂಕೀರ್ತನೆಗಳು, ಆಳೆತ್ತರದ ಮೋಹಕ ಕನಕದಾಸರ ಪುತ್ಥಳಿ, ಅಶ್ವಾರೋಹಿ ಕನ ಕರು, ಸಂಜೆ ಕಣ್ಣು-ಕಿವಿಗೆ ತಂಪು-ಇಂಪೆನಿಸುವ ದೀಪಾಲಂಕಾರ ಸಂಗೀತ ಕಾರಂಜಿ ಯಾತ್ರಾ ತಾಣದ ವಿಶೇಷ. 
ಅರಮನೆ ಹಾಗೂ ಸುತ್ತ-ಮುತ್ತಲ ಹಸಿರ ತಪ್ಪಲಲ್ಲಿ ಮೈವೇತ್ತಿಕೊಂಡಿರುವ ಕನಕದಾಸರ ಹತ್ತು ಹಲವು ಕುರುಹುಗಳು. ಧ್ಯಾನಸಕ್ತರಿಗೆ ತಪೆÇೀವನ, ಮನ ಮೋಹಕ ಉದ್ಯಾನವನ ವೀಕ್ಷಣೆಗೆ ಒಂದು ದಿನವಾದರೂ ಬೇಕು. ಈ ಕ್ಷಣಗಳನ್ನು ಸವಿಯಬೇಕಿದ್ದಲ್ಲಿ ಈ ಅರಮನೆಯ ಅನತಿ ದೂರದಲ್ಲೇ ಯಾತ್ರೀ ಸಮುಚ್ಛಯಗಳು ಲಭ್ಯವಿವೆ.
ದಾರಿ ಹೇಗೆ?
ಜಿಲ್ಲಾ ಕೇಂದ್ರ ಹಾವೇರಿಯಿಂದ ಬಾಡದ ಅರಮನೆ 25 ಕಿ.ಮೀ. ತಾಲೂಕ ಕೇಂದ್ರ ಶಿಗ್ಗಾಂವಿ ಯಿಂದ 8 ಕಿ.ಮೀ. ರಾಷ್ಟ್ರಪಕ್ಷಿ ನವಿಲುಧಾಮ ಬಂಕಾಪುರದಿಂದ 5 ಕಿ.ಮೀ ಹಾಗೂ ಹುಬ್ಬಳ್ಳಿ ಯಿಂದ 53 ಕಿ.ಮೀ. ಕ್ರಮಿಸಬೇಕು. ಬಸ್, ರೈಲು ಹಾಗು ವಿಮಾನ ಸೌಲಭ್ಯವಿದೆ 
    
   

Post a Comment

Distributed by Presul Info Tech

Distributed by Gooyaabi Templates | Designed by Presul Info Tech